Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇಂದ್ರ ಸರ್ಕಾರದ ಕಿಲೀ ಕೈ JDU, TDP ಕೈಯಲ್ಲಿ

ಎಕ್ಸಿಟ್ಪೋಲ್ನ್ನೇ ಎಕ್ಸಾಟ್ಪೋಲ್ಎಂದು ಸಂಭ್ರಮದಲ್ಲಿ ನಿರತಾವಗಿದ್ದ ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ಕಾದಿದೆ. 300 ನಂಬರ್ರೀಚ್ಆಗುವ ಕನಸು ನನಸಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಹೀಗಾಗಿ ಬಾರಿ ಬಿಜೆಪಿ ಕೇಂದ್ರದಲ್ಲಿ ಸ್ವಂತ ಬಲದಲ್ಲಿ ಸರ್ಕಾರ ನಡೆಸುವುದು ದುಸ್ತರವಾಗಲಿದೆ.

ಕೇಂದ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ರಚನೆ ಆಗುತ್ತದೆ ಎಂದು ಕನಸು ಕಾಣುತ್ತಿದ್ದ ಬಿಜೆಪಿಗೆ ಆಘಾತವಾಗಿದೆ. ಬಿಜೆಪಿ ಒಂದೇ ಮ್ಯಾಜಿಕ್ನಂಬರ್ದಾಟುತ್ತದೆ ಎಂದು ನಂಬಿಕೆ ಇಟ್ಟುಕೊಂಡಿತ್ತು. ಆದರೆ ಅದರ ಆಸೆ ಕಮರಿದೆ. ಈಗ ಎನ್ಡಿಎ ಮೈತ್ರಿಕೂಟಗಳೊಂದಿಗೆ ಸರ್ಕಾರ ರಚಿಸಬಹುದು. ಆದರೆ ಚಾನ್ಸ್ಗಳಿಗೆ ಬ್ರೇಕ್ಹಾಕಲು ಕಾಂಗ್ರೆಸ್ಪ್ಲ್ಯಾನ್ ಮಾಡಿಕೊಂಡಿದೆ.

ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಎಂಬ ಹಣೆ ಪಟ್ಟಿಯನ್ನು ಹೊತ್ತಿದೆ. ಆದರೆ ಬಿಜೆಪಿ ಒಂದೇ ಸರ್ಕಾರ ರಚನೆ ಮಾಡುವಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಬಿಜೆಪಿ ತನ್ನ ಮೈತ್ರಿ ಪಕ್ಷಗಳನ್ನು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆ ಇದೆ. ಇನ್ನು ಕಳೆದ ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಶತಾಯಗತಾಯ ಗದ್ದುಗೆ ಏರಲು ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳಲಿದೆ. ಚಂದ್ರ ಬಾಬು, ನಿತೀಶ್ಕಿಂಗ್ಮೇಕರ್ಸ್ಚುನಾವಣೆ ಆರಂಭಕ್ಕೂ ಮುನ್ನ ನಡೆದ ಮೈತ್ರಿಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ಕುಮಾರ್ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೇ ಆಂಧ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದರ ಬೆನ್ನಲ್ಲೆ INDIA ಮೈತ್ರಿ ಕೂಟದಿಂದಲೂ ಚಂದ್ರ ಬಾಬು ಅವರನ್ನು ಸಂಪರ್ಕಿಸಲಾಗಿದೆ. ಅಲ್ಲದೆ ನಿತೀಶ್ಕುಮಾರ್ ಅವರಿಗೆ ಗಾಳ ಹಾಕಲು INDIA ಮೈತ್ರಿ ಕೂಟ ಪ್ಲ್ಯಾನ್ಮಾಡಿಕೊಂಡಿದೆ.
ಟಿಡಿಪಿ, ಜೆಡಿಯು ನಿರ್ಣಾಯಕ ಏಕೆ? ಬಿಜೆಪಿ 2014, 2019ರಲ್ಲಿ ಮ್ಯಾಜಿಕ್ನಂಬರ್ ಕ್ರಾಸ್ ಮಾಡಿತ್ತು. ಆದರೆ ಈಗ ಬಿಜೆಪಿ 241 ಸ್ಥಾನಗಳಲ್ಲಿ ಬಂದು ನಿಂತಿದೆ. ಅಲ್ಲದೆ ಕಾಂಗ್ರೆಸ್ಮೂರಂಕಿ ಆಸು ಪಾಸಿನಲ್ಲಿದೆ. ಎನ್ಡಿಎ ಮೈತ್ರಿ ಕೂಟ 293 ಸ್ಥಾನಗಳನ್ನು ಗೆದ್ದು ಸುಲಭವಾಗಿ ಸರ್ಕಾರ ರಚಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ಆಸೆಗೆ ಕಾಂಗ್ರೆಸ್ ಪೆಟ್ಟು ನೀಡಲು ಸಿದ್ಧತೆ ನಡೆಸಿದೆ.
ಸದ್ಯದ ಲೆಕ್ಕಾಚಾರದಲ್ಲಿ ಟಿಡಿಪಿ 16 ಸ್ಥಾನ, ಜೆಡಿಯು 14 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಸನಿಹದಲ್ಲಿವೆ. ಎರಡೂ ನಂಬರ್ ಕೂಡಿಸಿದರೆ 30 ಆಗುತ್ತದೆ. 293ರಲ್ಲಿ 30 ಸ್ಥಾನವನ್ನು ಎನ್ಡಿಎ ಮೈತ್ರಿ ಕೂಟ ಕಳೆದುಕೊಂಡಲ್ಲಿ 263 ಸ್ಥಾನಗಳಿಗೆ ಬಂದು ನಿಲ್ಲುತ್ತದೆ. ಇನ್ನು INDIA ಮೈತ್ರಿ ಕೂಟ ಸದ್ಯ 234 ಸ್ಥಾನಗಳನ್ನು ಗೆದ್ದಿದೆ. ತಮ್ಮ ಸ್ಥಾನಗಳು ಹಾಗೂ ಟಿಡಿಪಿ ಹಾಗೂ ಜೆಡಿಯು ಸಂಖ್ಯೆಯನ್ನು ಸೇರಿಸಿದಾಗ 264 ಆಗುತ್ತದೆ. ಇನ್ನು ಪಕ್ಷೇತರ 17 ಜನರಿದ್ದಾರೆ. ಇವರನ್ನೆಲ್ಲಾ ಸೇರಿಸಿಕೊಂಡು INDIA ಮೈತ್ರಿ ಕೂಟ ಸರ್ಕಾರ ರಚಿಸುವ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈಗ ಟಿಡಿಪಿ ಹಾಗೂ ಜೆಡಿಯು ನಡೆಯವ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

 
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು