Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಗೆ ಅಪೌಷ್ಟಿಕತೆಯ ಸಮಸ್ಯೆ ಕಾಡದಿರಲಿ......

ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ನೂರು ಮಕ್ಕಳಲ್ಲಿ 32 ಮಕ್ಕಳು (ಅಂದಾಜು ಮೂರರಲ್ಲಿ ಒಬ್ಬರು) ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶೇ 36 ಮಕ್ಕಳು ಅಪೌಷ್ಟಿಕತೆಯಿಂದಾಗಿ ಕುಬ್ಬರಾಗಿದ್ದಾರೆ, ಮಗುವಿಗೆ ಸರಿಯಾಗಿ ಎದೆಹಾಲನ್ನು ಕುಡಿಸದೆ ಇರುವುದು, ಆರು ತಿಂಗಳ ನಂತರವೂ ಮಗುವಿಗೆ ಆಹಾರ ನೀಡುವುದನ್ನು ಪ್ರಾರಂಭಿಸದೇ ಇರುವುದು, ಬಾಟಲಿಯಲ್ಲಿ ಹಾಲು ಕುಡಿಸುವ ಅಭ್ಯಾಸ, ಆಗಾಗ ಮಗುವಿಗೆ ಆರೋಗ್ಯ ಕೈಕೊಡುತ್ತಿರುವುದು, ಬಡತನ ಮೊದಲಾದ ಕಾರಣಗಳಿಂದ ಅಪೌಷ್ಟಿಕತೆ ತಲೆದೋರುತ್ತದೆ. ದೀರ್ಘಕಾಲದಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿನ ತೂಕ ಕಡಿಮೆಯಾಗುತ್ತದೆ ಮತ್ತು ಬೆಳವಣಿಗೆಯು ಕುಂಠಿತವಾಗಿಬಿಡುತ್ತದೆ.

ಅಪೌಷ್ಟಿಕತೆಯನ್ನು ಕಂಡುಹಿಡಿಯುವುದು ಹೇಗೆ? ಮಗುವಿನ ತೂಕ ಮತ್ತು ಎತ್ತರ. ಅವರ ವಯಸ್ಸಿನ ಇತರ ಆರೋಗ್ಯವಂತ ಮಕ್ಕಳಿಗೆ ಹೋಲಿಸಿ ನೋಡಿದಾಗ ಹೆಚ್ಚಿದೆಯೋ, ಸರಿಯಿದೆಯೇ ಅಥವಾ ಕಡಿಮೆ ಇದೆಯೇ ಎಂಬುದು ತಿಳಿಯುತ್ತದೆ. ವಯಸ್ಸಿಗೆ ತಕ್ಕ ತೂಕವಿಲ್ಲದಿದ್ದರೆ 'ಕಡಿಮೆ ತೂಕ' ಎಂದೂ, ವಯಸಿಗೆ ತಕ್ಕ ಉದ್ದವಿಲ್ಲದಿದ್ದರೆ 'ಕುಂಠಿತ ಬೆಳವಣಿಗೆ' ಎಂದೂ, ಉದ್ದಕ್ಕೆ ತಕ್ಕ ತೂಕವಿಲ್ಲದಿದ್ದರೆ 'ಕ್ಷೀಣ ಬೆಳವಣಿಗೆ' ಎಂದೂ ಕರೆಯುತ್ತಾರೆ. ಸಾಧಾರಣವಾಗಿ ಆಯಾ ವಯಸ್ಸಿನ ಮಕ್ಕಳ ತೂಕ ಮತ್ತು ಎತ್ತರ ಎಷ್ಟಿರುತ್ತದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯವರು ಲೆಕ್ಕ ಹಾಕಿ ಸುಲಭವಾಗಿ ಅರ್ಥವಾಗುವ ಹಾಗೆ ರೇಖಾನಕ್ಷೆಯನ್ನು ಮಾಡಿದ್ದಾರೆ. ಅದು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. ಮಕ್ಕಳ ತಜ್ಞರ ಬಳಿಯೂ ಇರುತ್ತದೆ. ಅದರಲ್ಲಿ ಉದ್ದ ಮತ್ತು ಬೇಕಾಗುತ್ತದೆ. ಹಾಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತೂಕವನ್ನು ನಮೂದಿಸಿದಾಗ ಅಪೌಷ್ಟಿಕತೆ ಇದೆಯೇ, ಇಲ್ಲವೇ ಎಂದು ಸುಲಭವಾಗಿ ಹೇಳಬಹುದು. ಇದ್ದರೆ ಅದರ ತೀವ್ರತೆ ಎಷ್ಟಿದೆ ಎಂಬುದೂ ತಿಳಿಯುತ್ತದೆ.ಆರು ತಿಂಗಳಿನಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ತೋಳಿನ ಸುತ್ತಳತೆಯನ್ನು ಬಳಸಿಯೂ ಅಪೌಷ್ಟಿಕತೆಯನ್ನು ಕಂಡುಹಿಡಿಯಬಹುದು. ಅದು II.5 ಸೆಂ.ಮೀ.ಗಿಂತ ಕಡಿಮೆ ಇದ್ದರೆ ತೀವ್ರ ಮಟ್ಟದ ಅಪೌಷ್ಟಿಕತೆ ಎಂದೂ, II.5 ರಿಂದ 12.5 ಸೆಂ.ಮೀ. ಇದ್ದರೆ ಸಾಧಾರಣ ಮಟ್ಟದ ಅಪೌಷ್ಟಿಕತೆ ಎಂದೂ ಹಾಗೂ 13.5 ಸೆಂ.ಮೀ.ಗಿಂತ ಹೆಚ್ಚಿದ್ದರೆ ಅಪೌಷ್ಟಿಕತೆ ಇಲ್ಲದ ಆರೋಗ್ಯವಂತ ಮಗು ಎಂದೂ ಕರೆಯಲಾಗುತ್ತದೆ.

ಬಾಟಲಿ ಹಾಲು ಕುಡಿಸಬಹುದೇ? : ಎದೆಹಾಲಿನಲ್ಲಿರುವ ಸಂತುಲಿತ ಪೋಷಕಾಂಶಗಳು, ರೋಗನಿರೋಧಕಗಳು ಬಾಟಲಿ ಹಾಲಿನಲ್ಲಿರುವುದಿಲ್ಲ.ತೀವ್ರಅಪೌಷ್ಟಿಕತೆ ಐದು ಪರಿಹಾರವಾಗಲು ಸಾಧಾರಣ ಮೂರರಿಂದಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ದಾದಿಯರಿಂದ ಸಹಾಯ ಪಡೆದುಕೊಳ್ಳಬೇಕು.

ಅಪೌಷ್ಟಿಕತೆ ನಿವಾರಣೆಗೆ ಕೆಲವು ಟಿಪ್ಸ್

ಮೊದಲ ಆರು ತಿಂಗಳವರೆಗೆ ಮಗುವಿಗೆ ಎದೆಹಾಲು ಮಾತ್ರ ಕೊಡಿ ಹಾಗೂ ಕನಿಷ್ಠ ಎರಡು ವರ್ಷಗಳವರೆಗೆ ಎದೆಹಾಲು ಮುಂದುವರೆಸಿ, ಮಕ್ಕಳಿಗೆ ಬಾಟಲ್, ನಿಪ್ಪಲ್ ಅಭ್ಯಾಸ ಮಾಡಿಸದಿರಿ.

ಪ್ಯಾಕೆಟ್ ಅಥವಾ ಡಬ್ಬಗಳಲ್ಲಿ ಸಿಗುವ ಹುಡಿ ಅಥವಾ ಆಹಾರಗಳನ್ನು ಉಪಯೋಗಿಸಬೇಡಿ, ಮೂರು ವರ್ಷದವರೆಗೆ ಆರು ತಿಂಗಳಿಗೊಮ್ಮೆ 'ಎ' ಜೀವಸತ್ವದ ಬಿಂದುಗಳನ್ನು ಕೊಡಿಸಿ. ಸರಕಾರಿ ಆಸ್ಪತ್ರೆಗಳಲ್ಲಿ ಐದು ವರ್ಷಗಳವರೆಗೆ ಅದನ್ನು ಉಚಿತವಾಗಿ ನೀಡುತ್ತಾರೆ. ಮೊದಲ ಒಂದು ವರ್ಷದವರೆಗೆ ಪ್ರತಿದಿನ 'ಡಿ' ಜೀವಸತ್ವದ ಬಿಂದುಗಳನ್ನು ನೀಡಿರಿ.

 

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ