Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೋಲು ಜೀವನದ ಅಂತ್ಯವಲ್ಲ- ಡಾ.ಮಧುಸೂದನ ಕಾರಿಗನೂರು

ದಿನಾಂಕ 18-12-24 ರಂದು ಸಿರುಗುಪ್ಪದ ರಾಜೀವ್ ಗಾಂಧಿ ಮೆಮೋರಿಯಲ್ ವಿದ್ಯಾಸಂಸ್ಥೆಯಲ್ಲಿ ಸೃಜನಾ ಫೌಂಡೇಶನ್ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ನಡೆಸಲಾದ ಪ್ರೇರಣಾ ತರಗತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೃಜನಾ ಫೌಂಡೇಶನ್ ಅಧ್ಯಕ್ಷರಾದ ಡಾ.ಮಧುಸೂದನ ಕಾರಿಗನೂರು ಇವರು ಮಕ್ಕಳಿಗೆ ನೆನಪಿಗೆ ವ್ಯಾಯಾಮ ಹಾಗೂ ಸೋತು ಗೆದ್ದ ಸಾಧಕರ ಜೀವನದ ಬಗ್ಗೆ ಉಪನ್ಯಾಸ ನೀಡಿದರು.
ಎಡಮೆದುಳನ್ನು ಒರೆಗೆ ಹಚ್ಚಿ ನೆನಪಿನ ಪುಟಗಳನ್ನು ಹೆಚ್ಚುಮಾಡಿಕೊಳ್ಳುವ ಹಲವಾರು ವ್ಯಾಯಾಮಗಳನ್ನು ಪ್ರೊಜೆಕ್ಟರ್ ಚಿತ್ರಗಳ ಮೂಲಕ ಮಕ್ಕಳಿಗೆ ತೋರಿಸಿ ವಿನೋದದ ಮೂಲಕವೇ ಮೆದುಳನ್ನು ಚುರುಕುಗೊಳಿಸುವ ಸುಲಭ ವಿಧಾನಗಳನ್ನು ತಿಳಿಸಿದರು.


ಹಾಗೆಯೇ ಜೀವನದಲ್ಲಿ ಸೋಲು ಸಾಮಾನ್ಯ. ತಮಗೆ ಎದುರಾದ ಎಲ್ಲ ಋಣಾತ್ಮಕ ಸನ್ನಿವೇಶಗಳನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡು ಯಶಸ್ವಿಗಳಾಗಿರುವ ಹಲವಾರು ಸಾಧಕರ ಏಳು ಬೀಳುಗಳನ್ನು ರಸಪ್ರಶ್ನೆ ರೂಪದಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ಐಸಕ್ ನ್ಯೂಟನ್, ಸರ್.ಆಲ್ಬರ್ಟ್ ಐನ್ಸ್ಟೀನ್, ಎ.ಪಿ.ಜೆ. ಅಬ್ದುಲ್ ಕಲಾಂ, ರವಿಂದ್ರನಾಥ್ ಟಾಗೋರ್, ಡಿ.ವಿ. ಗುಂಡಪ್ಪನವರು , ಚಾರ್ಲಿ ಚಾಪ್ಲಿನ್ , ಅಮಿತಾಬಚ್ಚನ್ ಮುಂತಾದ ಯಶಸ್ವೀ ವ್ಯಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ಅನುಭವಿಸಿದವರೇ ಎಂದು ಹೇಳಿದರು. ಹಾಗೆಯೇ ಯಶಸ್ಸು ನಮ್ಮ ಹತ್ತಿರವೇ ಸುಳಿಯುತ್ತಿರುತ್ತದೆ. ಅದನ್ನು ಹುಡುಕುವ ಕಣ್ಣಿರಬೇಕು ಎಂದು ಹೇಳುತ್ತಾ ವಿಭಿನ್ನರೀತಿಯಲ್ಲಿ ಆಲೋಚಿಸಿದರೆ ಅದು ಸುಲಭವಾಗಿ ದಕ್ಕುತ್ತದೆ ಎಂದು ತಿಳಿಸಿದರು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ