Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೂಡಾದಿಂದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳು ಗಿಡ-ಮರ ಬೆಳೆಸುವುದು ಅತಿ ಅವಶ್ಯಕ : ಹೆಚ್ ಎಸ್ ಸುಂದರೇಶ್


ಶಿವಮೊಗ್ಗ.ಏ.11ಮಲೆನಾಡು ಬಯಲುಸೀಮೆಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಅತಿ ಅವಶ್ಯಕವಾಗಿದ್ದು ಸೂಡಾ ವತಿಯಿಂದ ನಗರ ಹಸುರೀಕರಣಗೊಳಿಸಲು ಉದ್ಯಾನವನ ಅಭಿವೃದ್ದಿ, ಗಿಡ ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು.

ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಕ್ಕದ ಪೊಲೀಸ್ ಲೇಔಟ್ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಂದಾಜು ಮೊತ್ತ ರೂ.25 ಲಕ್ಷದಲ್ಲಿ ಈ ಉದ್ಯಾನವನ ಪ್ರದೇಶಕ್ಕೆ ಫೌಂಡೇಶನ್ ಸಹಿತ ಕಾಂಪೌAಡ್ ಗೋಡೆ ನಿರ್ಮಾಣ ಮತ್ತು ಮುಂಭಾಗದಲ್ಲಿ ಟೈಲ್ಸ್ ಅಳವಡಿಸಲಾಗುವುದು. ಈ ಪಾರ್ಕಿನಲ್ಲಿ ಬನ್ನಿ, ಮುತ್ತುಗ, ಪಾರಿಜಾತ, ಸುರಗಿ, ಬಿಲ್ವ, ನಾಗಲಿಂಗ ಪುಷ್ಪ, ಮಾವು, ತೆಂಗು ಸೇರಿದಂತೆ ಅನೇಕ ವಿಶೇಷವಾದ ಗಿಡ ಮರಗಳಿದ್ದು ನೀರಿಗಾಗಿ ಬೋರ್‌ವೆಲ್ ಮತ್ತು ಪಾಥ್‌ವೇ ಅಗಲೀಕರಣಕ್ಕೆ ನಿವಾಸಿಗಳು ಮನವಿ ಮಾಡಿದ್ದು ಒಟ್ಟು ರೂ.50 ಲಕ್ಷ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ ಎಂದ ಅವರು ಎಲ್ಲರೂ ತಮ್ಮ ಮನೆಗಳ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು.

ನಂತರ ಗೋಪಾಳ ಬಡಾವಣೆಯ ಚಂದನ ಉದ್ಯಾನವನ ಅಭಿವೃದ್ದಿಗಾಗಿ ರೂ.15 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಹಳೆಯ ಹೊರಾಂಗಣ ಸಾಮಗ್ರಿಗಳನ್ನು ತೆಗೆದು ಪುನರ್ ಅಳವಡಿಕೆ ಮತ್ತು ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ಹೊಸದಾಗಿ 05 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಸಲಾಗುವುದು ಎಂದರು.

ಗೋಪಾಳ ಬಡಾವಣೆಯ ಸಿ ಮತ್ತು ಎಫ್ ಬ್ಲಾಕ್ ಉದ್ಯಾನವನಗಳ ಅಭಿವೃದ್ದಿಗಾಗಿ ರೂ.25 ಲಕ್ಷ ಮೊತ್ತದ ಕಾಮಗಾರಿ ಕೈಗೊಳ್ಳಲಿದ್ದು ಸಿ-ಬ್ಲಾಕ್ ಉದ್ಯಾನವನದಲ್ಲಿ 6 * 9 ಮೀ. ಅಳತೆಯ ಮೇಲ್ಚಾವಣಿಯೊಂದಿಗೆ ಯೋಗ ಮಂಟಪ ನಿರ್ಮಾಣ, ಸಿ ಮತ್ತು ಎಫ್ ಬ್ಲಾಕ್‌ಗಳ ಉದ್ಯಾನವನಗಳಲ್ಲಿ ಅಂದಾಜು 185 ಮೀ. ಪಾಥ್‌ವೇ ನಿರ್ಮಾಣ, ಉದ್ಯಾನವನದ ಮುಖ್ಯ ದ್ವಾರದ ಬಳಿ ಡೆಕ್‌ಸ್ಲಾö್ಯಬ್ ನಿರ್ಮಾಣ ಮಾಡಲಾಗುವುದು ಎಂದರು.

ಗೋಪಾಳ ಬಡಾವಣೆಯ ಡಿ ಮತ್ತು ಇ ಬ್ಲಾಕ್‌ಗಳ ಉದ್ಯಾನವನ ಅಭಿವೃದ್ದಿಗೆ ರೂ.25 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಪ್ಲಾಟ್‌ಫಾರಂ ನಿರ್ಮಾಣದೊಂದಿಗೆ 09 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಫೆನ್ಸಿಂಗ್ ದುರಸ್ತಿ, ಹಾಲಿ ಇರುವ ಪಾಥ್‌ವೇ ದುರಸ್ತಿ, ಉದ್ಯಾನವನದಲ್ಲಿ 07 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದರು.

ಪಂಪಾ ನಗರದಲ್ಲಿರುವ ಮಲೆನಾಡು ಸೊಸೈಟಿ ಪಕ್ಕದ ಉದ್ಯಾನವನದ ಅಭಿವೃದ್ದಿ ಮತ್ತು ಗಾಡಿಕೊಪ್ಪ ಪೊಲೀಸ್ ಲೇಔಟ್ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಅಳವಡಿಸುವ ರೂ.25 ಲಕ್ಷ ಮೊತ್ತದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಪ್ಲಾಟ್‌ಫಾರಂ ನಿರ್ಮಾಣದೊಂದಿಗೆ 8 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಸುಮಾರು 100 ಮೀ. ಪಾಥ್ ವೇ ನಿರ್ಮಾಣ ಹಾಗೂ 03 ಸಂಖ್ಯೆಯ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ಹಸಿರೇ ಉಸಿರು ಸಂಘದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಗಂಗಾಧರ್, ಜಿ.ಡಿ.ಮಂಜುನಾಥ್, ಜಿತೇಂದ್ರ ಗೌಡ, ಹಾಲಪ್ಪ, ನಿವಾಸಿಗಳು ಪಾಲ್ಗೊಂಡಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ