Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾತನಾಡುವ ಮರಗಳು , ಬೇಸಿಗೆ ಶಿಬಿರದ ಮಕ್ಕಳಿಂದ ಸಂಸ್ಕಾರ ನಾಟಕ

ಮರಿಯಮನಹಳ್ಳಿ:  ರಂಗಚೇತನಾ ಕಲಾ ಟ್ರಸ್ಟ್ ವತಿಯಿಂದ ಜರುಗಿದ ಮಸ್ತ್ ಮಜಾ ಮಕ್ಕಳ ರಜಾ ಬೇಸಿಗೆ ಶಿಬಿರದ ಮಕ್ಕಳಿಂದ‌ ಸಂಸ್ಕಾರ  ಎಂಬ ಪರಿಸರ ಕಾಳಜಿ ಕಥೆ ಆಧಾರಿತ ನಾಟಕ ಪ್ರದರ್ಶನ ಗೊಂಡಿತು ಈ ನಾಟಕವನ್ನು ಮಜಾಭಾರತ  ಮೆಂಟರ್ ಆಗಿದ್ದ   ಖ್ಯಾತ ರಂಗ ನಿರ್ದೇಶಕ ಬಿ.ಎಂ. ಯೋಗೀಶ್ ರಚನೆ ಮಾಡಿ ನಿರ್ದೇಶಿಸಿದರು.  ನಾಟಕದಲ್ಲಿ ಮರಕಡಿಯುವವರಿಂದ ಎರಡು ಮರಗಳು ತಪ್ಪಿಸಿಕೊಳ್ಳಲು ದೇವರನ್ನು ಕುರಿತು ತಪಸ್ಸು ಮಾಡಿ ಅವುಗಳು ರಾತ್ರೋ ರಾತ್ರೀ ಜಾಗ ಬದಲಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಹಾಗೆ ಕಾಡಿನಿಂದ ತಪ್ಪಿಸಿಕೊಂಡು ದೇವಸ್ಥಾನ ಸೂಕ್ತ ಸುರಕ್ಷಿತ ತಾಣ ಅಂತ ಬಂದರೆ ಅಲ್ಲಿ ಪೂಜಾರಿಯ ಪವಾಡ ಅಂತ ಪುಇಜಾರಿಯನ್ನೇ ದೇವರನ್ನಾಗಿಸಿ ಜನರು ಮೌಢ್ಯಕ್ಕೆ ಒಳಗಾಗಿ ಜಾತ್ರೆ ಮಾಡುತ್ತಾರೆ. 

ಈ ಘಟನೆ ಅರಿತ ಪೊಲೀಸರು ತನಿಖೆ ನೆಪದಲ್ಲಿ ಮರಕಡಿಯುವ  ಯೋಜನೆ ಹಾಕಿಕೊಳ್ಳುತ್ತಾರೆ.  ಈ ಸಂಗತಿ ಮರಗಳಿಗೆ ಗೊತ್ತಾಗಿ ರಕ್ಷಿಸುವವರೇ ಭಕ್ಷಕರಾದರೆ ಹೇಗೆ ಎಂದು ರಾತ್ರಿಯೇ ಆ ಮರಗಳೆರಡು  ಒಂದು ಶಾಲಾ ಆವರಣದೊಳಕ್ಕೆ ಬರುತ್ತವೆ. ಮರುದಿನ ಶಾಲೆಯಲ್ಲಿನ ಗುರುಗಳು ಪರಿಸರ, ಮನುಕುಲ ಸೇರಿದಂತೆ ಭೂಮಿಯ ಮೇಲಿನ ಜೀವಿಗಳೆಲ್ಲವಕ್ಕೂ ಮರಗಳ ಅಗತ್ಯವಿರುವ ಬಗ್ಗೆ ಮಕ್ಕಳಿಗೆ ಪಾಠ ಮಾಡುತ್ತಾರೆ.  ಅದೇ ಅಮಯಕ್ಕೆ ಹೊಸ ಶಾಲಾ ಕಟ್ಟಡ ಕಟ್ಟಲು ಸ್ಥಳಕ್ಕಾಗಿ ಈ ಮರಗಳನ್ನು ಕಡಿಯಬೇಕಾಗಿದೆ ಎಂದು ಅಧಿಕಾರಿಗಳು ಶಿಕ್ಷಕರಿಗೆ ಹೇಳಿದಾಗ ಮಕ್ಕಳೆ ಮರಗಳನ್ನು ಅಪ್ಪಿಕೊಂಡು ಮರಕಡಿಯುವುದನ್ನು ನಿಲ್ಲಿಸುತ್ತಾರೆ. ಇಂತಹ ಸಂಸ್ಕಾರಯುತ  ಶಿಕ್ಷಕರು ಮಕ್ಕಳಿಂದ ನಮಗೆ ಉಳಿಗಾಲವಿದೆ ಎಂದು ಮರಗಳಿಗೆ ಮನವರಿಕೆಯಾಗುತ್ತದೆ.  ಇಂದು ದೇಶದುದ್ದಕ್ಕೂ ಕಾಡುವ ಬರಗಾಲ ಮಳೆಯ ಅಭಾವಕ್ಕೆ  ಕಾಡುಗಳ ನಾಶವೇ ಕಾರಣವೆಂದು ನಾಟಕ ಪ್ರೇಕ್ಷಕರಿಗೆ  ಮನವರಿಕೆ ಮಾಡಿಕೊಡುತ್ತಾ  ಮರಗಳನ್ನು ಉಳಿಸುವ ಬೆಳೆಸುವ  ಜವಾಬ್ದಾರಿಗಳನ್ನು ನಾಟಕ ನೋಡುಗರ ಮನದಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.  ಮರಗಳನ್ನು ಸಂರಕ್ಷಿಸಲು ಉತ್ತರಾಖಂಡದಲ್ಲಿ ಮಹಿಳೆಯರಿಂದ ಜರುಗಿದ ಚಿಪ್ಕೋ ಚಳುವಳಿಯ ನೆನಪನ್ನು ಈ ನಾಟಕ ಮರಕಳಿಸಿತು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ