Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇವರದಾಸಿಮಯ್ಯನವರು ತತ್ವಗಳು ಯುವಪೀಳಿಗೆಗೆ ಆದರ್ಶವಾಗಬೇಕು: ಡಾ.ರೋಹಿಣಿ


ದೇವರ ದಾಸಿಮಯ್ಯ ಅವರ ತತ್ವಗಳು ಹಾಗೂ ಸಂದೇಶಗಳು ಇಂದಿನ ಯುವ ಪೀಳಿಗೆ ಆದರ್ಶವಾಗಗಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯರಾದ ಡಾ. ರೋಹಿಣಿ ಅವರು ಹೇಳಿದರು.



ಇಂದು (ಎ.2) ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು, ಸಮಾಜ ಸುಧಾರಣೆಯಲ್ಲಿ ದೇವರ ದಾಸಿಮಯ್ಯನವರ ಪಾತ್ರ ಅಪಾರ ಎಂದು ಹೇಳಿದರು.



ವಿಶೇಷ ಉಪನ್ಯಾಸಕರಾಗಿ ಡಾ. ಕೆ. ಎಸ್. ಅನಿತಾ ಅವರು ಮಾತನಾಡಿ ಕಾಯಕದಲ್ಲೇ ದೇವರನ್ನು ಕಂಡವರು ವಚನಕಾರರು, ಬಸವಣ್ಣನವರಿಗಿಂತ ಮುಂಚೆಯೇ ಕಾಯಕದಲ್ಲಿ ದೇವರನ್ನು ಕಂಡವರು ದೇವರ ದಾಸಿಮಯ್ಯನವರು, ಒಮ್ಮೆ ಶಿವ ಜೇಡರ ದಾಸಿಮಯ್ಯನವರ ಕಾಯಕಕ್ಕೆ ಒಲಿದು ಅಕ್ಷಯ ಪಾತ್ರೆಯನ್ನು ಜೇಡರ ದಾಸಿಮಯ್ಯನವರಿಗೆ ನೀಡುತ್ತಾನೆ, ಲೋಕ ಕಲ್ಯಾಣಕ್ಕಾಗಿ ಸಮಾಜದ ಅಭಿವೃದ್ಧಿಗಾಗಿ ಅ ಅಕ್ಷಯ ಪಾತ್ರೆಯನ್ನು ಜೇಡರ ದಾಸಿಮಯ್ಯ ಬಳಸುತ್ತಾರೆ ಅದರಿಂದಲೇ ಅವರಿಗೆ ದೇವರ ದಾಸಿಮಯ್ಯ ಎಂಬ ಹೆಸರು ಬಂದಿತು ಎಂದು ಹೇಳಿದರು.



ತಮಗೆ ಸಿಕ್ಕ ಅವಕಾಶವನ್ನು ಯಾರು ಸಮಾಜದ ಅಭಿವೃದ್ಧಿಗಾಗಿ ಶ್ರಮವಹಿಸುತ್ತರೋ ಅವರು ಎಂದಿಗೂ ಸಮಾಜದ ನೆನಪಿನಲ್ಲಿ ಉಳಿಯುತ್ತಾರೆ, ಅದಕ್ಕೆ ನಿದರ್ಶನ ಜೇಡರ ದಾಸಿಮಯ್ಯ, ಬಂಡವಾಳಶಾಹಿಗಳ ವಿರುದ್ಧ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದವರು ದೇವರ ದಾಸಿಮಯ್ಯನವರು ಎಂದರು.



ಭಾರತೀಯ ಸಂವಿಧಾನದ ಆಶಯಗಳಿಗೆ ಪೂರಕವಾದ ತತ್ವಗಳನ್ನು ದೇವರ ದಾಸಿಮಯ್ಯ ಹೊಂದಿದ್ದರು, ಮಹಿಳೆಯರಿಗೆ ಸಮಾನ ಗೌರವ ಅವಕಾಶ ನೀಡಬೇಕು ಹಾಗೂ ಲಿಂಗತ್ವ ಅಸಮಾನತೆಯ ವಿರುದ್ಧ ಕಿಡಿ ಕಾರಿದ್ದರು ದೇವರ ದಾಸಿಮಯ್ಯನವರು ಎಂದರು.



ಡಿ. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರಾದ ಎಲ್. ಸಂದೇಶ್ ಮಾತನಾಡಿ ವೈಯಕ್ತಿಕ ಅಭಿವೃದ್ಧಿಗಾಗಿ ಶ್ರಮಿಸುವವರು ಕೇವಲ ಅವರ ಮನೆಗಳಲ್ಲೆ ಉಳಿದುಕೊಳ್ಳುತ್ತಾರೆ, ಸಮಾಜ ಏಳಿಗೆಗಾಗಿ ಶ್ರಮಿಸುವವರು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಾರೆ, ಶರಣರು,ಸಂತರು, ಮಹಾನೀಯರ ಎಲ್ಲರೂ ಸಹ ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಎಂದು ಹೇಳಿದರು.



ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ. ವಿ. ನಂದೀಶ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎಂ. ವಿ ಧರಣಯ್ಯ , ಮುಖಂಡರಾದ ಎನ್. ಡಿ ಹರಿಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ