Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾ ಕುಂಭಾಮೇಳ ದ ವಿಶೇಷತೆ

 

 

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸಿದ್ದಾರೆ.ನೀವು ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದರೆ,ಕುಂಭಮೇಳದೊಂದಿಗೆ, ಪ್ರಯಾಗರಾಜ್ ಸುತ್ತಮುತ್ತಲಿನ ಚಿತ್ರಕೂಟ ಮತ್ತು ರೇವಾ ನಗರಗಳನ್ನು ಭೇಟಿ ಮಾಡುವುದು ಉತ್ತಮ ಆಯ್ಕೆಯಾಗಿದೆ. ಚಿತ್ರಕೂಟದ ಐತಿಹಾಸಿಕ ಸ್ಥಳಗಳು ಮತ್ತು ರೇವಾದ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಿ.


ದೇಶದಲ್ಲಿನ ಹಿಂದೂಗಳಿಗೆ ಈಗ ಹಬ್ಬದ ಸಮಯ ಅಂತಲೇ ಹೇಳಬಹುದು. ನಾಲ್ಕು ಗ್ರಹಗಳು ಸೇರುವ ವಿಶೇಷ ಸಂದರ್ಭ ಇದಾಗಿದೆ ಎನ್ನಲಾಗುತ್ತಿದೆ. ಕೋಟ್ಯಾಂತರ ಜನ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಪ್ರಯಾಗದಲ್ಲಿ ಸೇರುತ್ತಿದ್ದಾರೆ. ಈ ಮಹಾ ಕುಂಭಮೇಳವನ್ನು ನೀವು ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು ಎನ್ನುವುದಕ್ಕೆ ಹಲವು ಕಾರಣಗಳಿವೆ. ಇನ್ನು ಈ ಮಹಾಕುಂಭ ಮೇಳದಲ್ಲಿ 40 ಕೋಟಿಗೂ ಹೆಚ್ಚು ಜನ ಭಾಗಹಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಉತ್ತರ ಭಾರತದಲ್ಲಿ ಈಗ ಮೈಕೊರೆಯುವ ಚಳಿ ಇದೆ. ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಮೈಕೊರೆಯುವ ಚಳಿಯಲ್ಲೂ ಜನ ಸಾಗರವೇ ಪ್ರಯಾಗದಲ್ಲಿ ಸೇರಿದೆ. ಈ ಸಂದರ್ಭದಲ್ಲಿ ನೀವು ಮಹಾ ಕುಂಭಮೇಳದಲ್ಲಿ ಯಾಕೆ ಭಾಗವಹಿಸಬೇಕು ಎನ್ನುವುದಕ್ಕೆ ಪ್ರಮುಖ ಡೀಟೆಲ್ಸ್‌ ಇಲ್ಲಿದೆ.

ಕುಂಭಮೇಳದಲ್ಲಿ ವಿಶ್ವದಾದ್ಯಂತ ಜನ ಭಾಗವಹಿಸುತ್ತಿದ್ದಾರೆ. ಯಾಕೆಂದರೆ ನಾವು ಜನ್ಮದಲ್ಲಿ ಒಮ್ಮೆ ಮಾತ್ರ ಈ ಮಹಾ ಮೇಳವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಿದೆ. ಈ ಮಹಾಕುಂಭ ಮೇಳದಲ್ಲಿ ನೀವು ಮಾಡಬಹುದಾದ ಪ್ರಮುಖ ವಿಷಯಗಳ ವಿವರ ಇಲ್ಲಿದೆ.

ಪವಿತ್ರ ಸ್ನಾನ: ಮಹಾಕುಂಭ ಮೇಳದ ಕೇಂದ್ರಬಿಂದುವೆಂದರೆ ಪವಿತ್ರ ಸ್ನಾನ ಅಥವಾ ಅಮೃತ ಸ್ನಾನ. ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ 144 ವರ್ಷಗಳಿಗೆ ಒಮ್ಮೆ ನಡೆಯುವ ಈ ಮೇಳದ ವಿಶೇಷವೆಂದರೆ. ಪ್ರಯಾಗರಾಜ್‌ನಲ್ಲಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಒಂದಾಗಿದೆ. ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ವಿಶೇಷವಾಗಿದೆ. ಸಣ್ಣ ದೋಣಿಯ ಮೂಲಕ ಹಿಂದೂ ತೀರ್ಥಯಾತ್ರೆಗಳನ್ನು ಇಲ್ಲಿನ ತ್ರಿವೇಣಿ ಸಂಗಮಕ್ಕೆ ಕರೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಇದೆ. ಪುರೋಹಿತರು ಸಹ ಇಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಇಲ್ಲಿ ತ್ರಿವೇಣಿ ಸಂಗಮ ಎನ್ನುವುದು ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಮಾಗಮವಾಗಿದೆ. ಈ ಸಂಗಮದಲ್ಲಿ ನೀವು ಸ್ನಾನ ಮಾಡುವುದರಿಂದ ನಿಮ್ಮ ಪುನರ್‌ಜನ್ಮಗಳ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ ಇದೆ.

ನಾಗಾ ಸಾಧುಗಳನ್ನು ಭೇಟಿ ಮಾಡಿ: ಈ ಕುಂಭ ಮೇಳದಲ್ಲಿ ಸಾವಿರಾರು ಜನ ಸಾಧು - ಸಂತರು ಭಾಗವಹಿಸುತ್ತಾರೆ. ಸಾವಿರಾರು ಜನ ಸಾಧುಗಳನ್ನು ನೀವು ಇಲ್ಲಿ ನೋಡಬಹುದು. ಆದರೆ ಸಾಧುಗಳನ್ನು ನೋಡುವ ಹಾಗೂ ಅವರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ. ಸಾಧುಗಳು ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಆದರೆ ನೀವು ಇಲ್ಲಿ ಸಾವಿರಾರು ಜನ ಸಾಧುಗಳನ್ನು ಇಲ್ಲಿ ನೋಡಬಹುದು.

ವಿಶೇಷ ಕಾರ್ಯಕ್ರಮ: ಮಹಾ ಕುಂಭಮೇಳದ ಭಾಗದಲ್ಲಿ ಹಲವು ವಿಶೇಷ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡುವುದೇ ವಿಶೇಷವಾಗಿದೆ. ಕೋಟ್ಯಾಂತರ ಜನ ಭಕ್ತಾಧಿಗಳು ಮಹಾಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದು. ಹಲವು ಧಾರ್ಮಿಕ ಪೂಜೆಗಳು ನಡೆಯುತ್ತಿವೆ. ಇದನ್ನು ನೋಡುವುದು ವಿಶೇಷವಾಗಿದೆ. ವಾರಣಾಸಿಗೆ ಹೋಗಬಹುದು: ಇನ್ನು ಪ್ರಯಾಗ್ ರಾಜ್‌ನಿಂದ ಕೆಲವೇ ಕಿ.ಮೀ ದೂರದಲ್ಲಿ ವಾರಣಾಸಿ ಇದೆ. ಕಾಶಿ - ವಾರಣಾಸಿಗೆ ಒಮ್ಮೆಯಾದರೂ ಹೋಗಬೇಕು ಎನ್ನುವುದು ಕೋಟ್ಯಾಂತರ ಹಿಂದೂ ಭಕ್ತರ ಕನಸಾಗಿದೆ. ಉತ್ತರ ಪ್ರದೇಶದ ಈ ಭಾಗದಿಂದ ನೀವು ಕಾಶಿ ಹಾಗೂ ವಾರಣಾಸಿಗೆ ನೀವು ಭೇಟಿ ನೀಡಬಹುದಾಗಿದೆ.
ಚಿತ್ರಕೂಟ:


ಚಿತ್ರಕೂಟವು ಪ್ರಯಾಗರಾಜ್‌ನಿಂದ 120 ಕಿಮೀ ದೂರದಲ್ಲಿದೆ. ಈ ಸ್ಥಳವು ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಹಣ ಪ್ರಿಯರಿಗೆ ಪರಿಪೂರ್ಣವಾಗಿದೆ. ಇಲ್ಲಿ ನೀವು ಅನೇಕ ಐತಿಹಾಸಿಕ ತಾಣಗಳಲ್ಲಿ ಪರಿಣತಿ ಪಡೆಯುವ ಅವಕಾಶವನ್ನು ಸಹ ಪಡೆಯಬಹುದು. ಸೀಕ್ರೆಟ್ ಗೋದಾವರಿ ಗುಹೆಗಳು, ಲಕ್ಷ್ಮಣ ಬೆಟ್ಟ, ಹನುಮಾನ್ ಧಾರಾ, ಕಾಮದಗಿರಿ ದೇವಸ್ಥಾನ, ರಾಮ್ ದರ್ಶನ್, ಭಾರತ್ ಮಿಲಾಪ್ ದೇವಸ್ಥಾನ ಮತ್ತು ಜಾನಕಿ ಕುಂಡ್ ಅನ್ನು ಭೇಟಿ ಮಾಡಬಹುದು. ಇದರ ಹೊರತಾಗಿ ಚಿತ್ರಕೂಟ ಮತ್ತು ಶಬರಿ ಜಲಪಾತಗಳ ಮೇಲಿನ ಬೆಟ್ಟಗಳಿಗೆ ಭೇಟಿ ನೀಡಬಹುದು. ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿದ ಒಂದು ಪಟ್ಟಣ.


ರೇವಾ:


ರೇವಾ ಪ್ರಯಾಗ್‌ರಾಜ್‌ನಿಂದ ಕೇವಲ 133 ಕಿಮೀ ದೂರದಲ್ಲಿದೆ. ರೇವಾ ಮಧ್ಯಪ್ರದೇಶದ ಒಂದು ನಗರ. ಇದು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಬಹಳ ಪ್ರಸಿದ್ಧವಾಗಿದೆ. ನೀವು ಜನಸಂದಣಿಯಿಂದ ದೂರ ನಡೆಯಲು ಬಯಸಿದರೆ, ನೀವು ರೇವಾಗೆ ಹೋಗಬಹುದು. ರೇವಾ ಕೋಟೆಯನ್ನು ನೋಡಲು ಹೋಗಬಹುದು. ರಾಣಿ ಸರೋವರವು ಶಾಂತವಾದ ಸರೋವರವಾಗಿದ್ದು, ನಗರದ ಗದ್ದಲದಿಂದ ದೂರದಲ್ಲಿದೆ. ಈ ಸ್ಥಳವು ವಾಕಿಂಗ್ ಮತ್ತು ಪಿಕ್ನಿಕ್ಗೆ ಬಹಳ ಪ್ರಸಿದ್ಧವಾಗಿದೆ.


ನೀವು ಅಲ್ಲಿ ಬೈಹಾರ್ ಗುಹೆಗಳನ್ನು ಅನ್ವೇಷಿಸಬಹುದು. ಕಲ್ಲಿನ ರಚನೆಗಳಲ್ಲಿ ನಿರ್ಮಿಸಲಾದ ಈ ಗುಹೆಗಳಿಂದ ಸ್ಥಳದ ಇತಿಹಾಸವು ತಿಳಿಯುತ್ತದೆ. ಕೋಟ್ ಜಲಪಾತವು ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅದೇ ಸಮಯದಲ್ಲಿ, ನೀವು ವೈಟ್ ಟೈಗರ್ ರಿಸರ್ವ್ಗೆ ಹೋಗಬಹುದು. ಹಾಗಾಗಿ ಇಲ್ಲಿನ ರೇವಾ ಬಳಿಯಿರುವ ಚಾಚೈ ಜಲಪಾತವು ಅತ್ಯಂತ ಸುಂದರವಾದ ಜಲಪಾತವಾಗಿದೆ.

Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು