Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೆಲಕ್ಕೆ ಬಿದ್ದ ಸಾವಿರಾರು ಎಕರೆ ಭತ್ತ

ಸಿರುಗುಪ್ಪ.ನ.15:- ತಾಲೂಕಿನಾದ್ಯಂತ ಗುರುವಾರ ರಾತ್ರಿ
ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಆರ್.ಎನ್.ಆರ್. ಮತ್ತು
ಸೋನಾಮಸೂರಿ ಭತ್ತವು ನೆಲಕ್ಕುರುಳಿ ಬಿದ್ದಿದ್ದು,
ರೈತರನ್ನು ಆತಂಕಕ್ಕೆ ಈಡು ಮಾಡಿದೆ. ಕಳೆದ ೨ದಿನಗಳಿಂದ
ಆಗಾಗಿ ಜೋರಾಗಿ ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನ
ಮಳೆ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು,
ರೈತರನ್ನು ಮತ್ತಷ್ಟು ಕಂಗಾಲಾಗಿಸಿದೆ. ತಾಲೂಕಿನ ವಿವಿಧ
ಗ್ರಾಮಗಳಲ್ಲಿ ರೈತರು ಬೆಳೆದ ಸಾವಿರಾರು ಎಕರೆಯಲ್ಲಿ ಭತ್ತ
ನೆಲಕ್ಕುರುಳಿ ಬಿದ್ದಿದೆ.
ಶೇ.೭೫ರಷ್ಟು ಜಮೀನಿನಲ್ಲಿ ಆರ್.ಎನ್.ಆರ್. ಭತ್ತವನ್ನೇ
ತಾಲೂಕಿನಾದ್ಯಂತ ಬೆಳೆಯಲಾಗಿದ್ದು, ಇಲ್ಲಿಯವರೆಗೆ
ಶೇ.೩೦ರಷ್ಟು ಮಾತ್ರ ಬೆಳೆ ಕೊಯ್ಲಾಗಿದ್ದು, ಇನ್ನೂ
ಶೇ.೭೦ಭಾಗದಷ್ಟು ಕೊಯ್ಲು ಕಾರ್ಯ ನಡೆಯಬೇಕಾಗಿದೆ.
ಭತ್ತ ಕೊಯ್ಲಿಗಾಗಿ ತಾಲೂಕಿನಾದ್ಯಂತ ನೂರಾರು ಭತ್ತ
ಕೊಯ್ಲು ಯಂತ್ರಗಳು ಬಂದು ನಿಂತಿವೆ, ಆದರೆ ಮಳೆಯ
ಕಾರಣದಿಂದ ಕೊಯ್ಲು ಯಂತ್ರಗಳು ಗದ್ದೆಗಿಳಿಯಲು
ಸಾದ್ಯವಾಗಿಲ್ಲ.
ಆರ್.ಎನ್.ಆರ್.ಭತ್ತವು ಈಗಾಗಲೇ ಕೊಯ್ಲಿಗೆ ಬಂದಿದ್ದು,
ಮಳೆ ಬರದಿದ್ದರೆ ಕೊಯ್ಲು ಕಾರ್ಯ ಜೋರಾಗಿರುತ್ತಿತ್ತು.
ಮಳೆಯಿಂದಾಗಿ ಕೊಯ್ಲು ಸಾಧ್ಯವಾಗದೆ ಇರುವುದು ಒಂದು
ಕಡೆಯಾದರೆ ಮತ್ತೊಂದ ಕಡೆ ಮಳೆಗೆ ಭತ್ತದ
ಬೆಳೆಯು ನೆಲಕ್ಕುರುಳಿ ಬಿದ್ದಿರುವುದು ಇನ್ನೂ ಮೂರು ದಿನ
ಮಳೆಬರುವ ಸೂಚನೆ ಇರುವುದರಿಂದ ಇಳುವರಿ ಕಡಿಮೆ
ಬರುತ್ತದೆ, ಬೆಳೆಯ ಬಣ್ಣವು ಕಪ್ಪಾಗುತ್ತದೆ, ಇದರಿಂದ
ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುವುದಿಲ್ಲ. ಸದ್ಯ
ಮಾರುಕಟ್ಟೆಯಲ್ಲಿ ರೂ.೧೯೦೦ಕ್ಕೆ ಆರ್.ಎನ್.ಆರ್. ಭತ್ತವು
ಮಾರಾಟವಾಗುತ್ತಿರುವುದು ರೈತರಿಗೆ ತೀವ್ರವಾದ ನಷ್ಟವಾಗುವ
ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ
ಅಧಿಕಾರಿಗಳು ನೆಲಕ್ಕೆ ಉರುಳಿಬಿದ್ದ ಭತ್ತದ ಗದ್ದೆಗಳಿಗೆ ಬೇಟಿ
ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನೆಲಕ್ಕೆ ಬಿದ್ದ ಭತ್ತವನ್ನು ಕೊಯ್ಲು ಮಾಡಲು ಒಂದು
ಎಕರೆಗೆ ಮೂರು ಗಂಟೆ ಬೇಕಾಗುತ್ತದೆ.

ಕೊಯ್ಲು ಮಾಡಲು ರೂ.೨೫೦೦ ರಿಂದ ೨೮೦೦ ಬೆಲೆ ನಿಗದಿ
ಮಾಡಿರುವುದು, ಇಳುವರಿ ಕಡಿಮೆಯಾಗುವುದು,
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯದೆ ಇರುವುದು
ನಮಗೆ ತೀವ್ರವಾದ ನಷ್ಟ ಉಂಟಾಗುತ್ತಿದೆ ಎಂದು
ತೆಕ್ಕಲಕೋಟೆ ರೈತ ಕಾಡಸಿದ್ದಪ್ಪ, ಬಗ್ಗೂರು ರೈತ
ಹುಲುಗಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ನಮ್ಮ ಇಲಾಖೆ
ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೆಲಕ್ಕೆ ಬಿದ್ದ
ಗದ್ದೆಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ, ಇನ್ನೆರೆಡು
ದಿನಗಳಲ್ಲಿ ಸರ್ವೆಕಾರ್ಯ ಮುಗಿಯಲಿದೆ ಎಂದು ಸಹಾಯಕ ಕೃಷಿ
ನಿರ್ದೇಶಕ ಎಸ್.ಬಿ.ಪಾಟೀಲ್ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ