
ಗಾಂಧಿ ಜಯಂತಿ ನಿಮಿತ್ತ ಸಮೀಪದ ನಡವಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘಟನೆಯಿ0ದ ಬುಧವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು. ಸಂಘಟನೆಯ ಅಧ್ಯಕ್ಷö್ಯ ದೇವನಾಯ್ಕ ಮಾತನಾಡಿ ರಕ್ತದಾನ ಮಾಡುವುದರಿಂದ ಒಬ್ಬ ಜೀವಿ ಮಾತ್ರವಲ್ಲ ಅವರ ಕುಟುಂಬ ವರ್ಗವನ್ನೇ ರಕ್ಷಿಸಿದಂತಾಗುತ್ತದೆ. ಅಲ್ಲದೆ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾದನೆಗೊಂಡು ಮನುಷ್ಯನಿಗೆ ಹೊಸ ಚೈತನ್ಯ ಮೂಡುತ್ತದೆ ಎಂದರು. ಈ ಸಂಧರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಶಿಬಿರದಲ್ಲಿ ಆರೋಗ್ಯ ಸಹಾಯಕರಾದ ಮೋಹನ್,ಸುಮಲತಾ,ಶಶಿಕಲಾ, ಗ್ರಾಪಂ ಸಿಬ್ಬಂದಿ ಮುತ್ತು, ಪಾಂಡು, ಸಂಘದ ಆಯೋಜಕರಾದ ತಿಪ್ಪೇಸ್ವಾಮಿ, ಶಂಕ್ರಿ,ಶರಣಪ್ಪ, ಪರಮೇಶ, ಚಂದ್ರ,ಬಸವ,ರಾಮ,ಗಾದಿ ಅಡಿವೇಶ ಸೇರಿದಂತೆ ಆಶಾ ಕಾರ್ಯಕರ್ತರು ಗ್ರಾಮಸ್ತರು ಉಪಸ್ಥಿತರಿದ್ದರು.

