ಗಾಡ್ ಅಂಧಕಾರದಿಂದ ಕೂಡಿದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವಿಯು ತ್ರಿಮೂರ್ತಿಗಳನ್ನು ಕೂಡ ಸೃಷ್ಟಿಸಿದಳು. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳನ್ನು ನಿರ್ವಹಿಸಲು ಹೇಳಿದ ದೇವಿಯು ಗಾಢಾಂಧಕಾರದಿಂದ ಕೂಡಿದ ಈ ಸೃಷ್ಟಿಯನ್ನು ತನ್ನ ದಿವ್ಯ ಪ್ರಭೆಯಿಂದ ಕೂಷ್ಮಾಂಡ ದೇವಿಯು ಬೆಳಗಿಸಿದಳು.
ಭಯ ಕರ್ತನಾದ ಶಿವನು ತನ್ನನ್ನು ಪರಿಪೂರ್ಣವಾಗಿ ಸಲು ಕೇಳಿಕೊಂಡಾಗ ಕೂಷ್ಮಾಂಡ ದೇವಿಯು ಆತನಿಗೆ ಒಟ್ಟು 18 ಸಿದ್ಧಿಗಳನ್ನು ದೇವಿಯ ರೂಪದಲ್ಲಿ ಅನುಗ್ರಹಿಸಿದಳು. ಆಕೆಯೇ ಸಿದ್ದಿಧಾತ್ರಿ ದೇವಿ.ಆತನಿಗೆ ಮೊದಲ 8 ಸಿದ್ದಿಗಳಾದ ಅಣಿಮಾ,ಮಹಿಮಾ,ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವಗಳು ಪರಿಪೂರ್ಣತೆಯನ್ನು ನೀಡಿದರೆ ಉಳಿದ ಹತ್ತು ಸಿದ್ದಿಗಳು ಸಂಪೂರ್ಣ ಪರಿಪೂರ್ಣನನ್ನಾಗಿಸಿದವು.
ಸೃಷ್ಟಿಕರ್ತ ಬ್ರಹ್ಮನು ಬ್ರಹ್ಮಾಂಡದಲ್ಲಿ ಸೃಷ್ಟಿ ಕಾರ್ಯವನ್ನು ನಡೆಸಲು ಸಿದ್ದಿರಾತ್ರಿಯ ಸಹಾಯವನ್ನು ಯಾಚಿಸಲು ಆಕೆ ಪರಶಿವನ ಅರ್ಧ ಶರೀರವನ್ನು ಸ್ತ್ರೀ ರೂಪಕ್ಕೆ ಬದಲಾಯಿಸಿದಳು. ಆದ್ದರಿಂದ ಶಿವನನ್ನು 'ಅರ್ಧ ನಾರೀಶ್ವರ' ಎಂದು ಕರೆಯುತ್ತಾರೆ.
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಹಿ
ಮಹಾ ಗೌರಿ ಶುಭಂ ದಧ್ಯಾನ್ಮಹಾದೇವ ಪ್ರಮೋದನಾ
ಸಿಂಹ ವಾಹಿನಿಯಾಗಿರುವ ಸಿದ್ದಿಧಾತ್ರಿಯು ಕಮಲ ಪುಷ್ಪದ ಮೇಲೆ ಕುಳಿತಿದ್ದು ನಾಲ್ಕು ಕೈಗಳನ್ನು ಹೊಂದಿದ್ದು ಶಂಖ, ಚಕ್ರ,ಹರಿಗೆಗಳನ್ನು ಹೊಂದಿದ್ದು ಶ್ವೇತ ವಸ್ತ್ರಧಾರಿಣಿಯಾಗಿರುವ ಮಹಾಶಿವನಿಗೆ ಆನಂದವನ್ನು ತರುವ, ಪರಿಪೂರ್ಣತೆಯನ್ನು ನೀಡುವ ಸಿದ್ದಿ ಧಾತ್ರಿ ದೇವಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
" ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತ, ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ"
ಎಂದು ದೇವಿಯ ಮಂತ್ರವನ್ನು ಪಠಿಸಬೇಕು.
ಓ ಐ0 ಹ್ರೀ0 ಶ್ರೀಮ್ ಸಿದ್ಧಿ ಧಾತ್ರೈ ನಮಃ
ಎಂಬ ಪ್ರಣವ ಮಂತ್ರವನ್ನು ಪಠಿಸಿ ಆಕೆಯ ಕೃಪೆಗೆ ಪಾತ್ರರಾಗಬೇಕು.
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

