Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದಿಧಾತ್ರಿ ದೇವಿ ನವರಾತ್ರಿಯ ಒಂಬತ್ತನೇ ದಿನ

ನವರಾತ್ರಿಯ 9ನೇ ದಿನವನ್ನು ಸಿದ್ದಿಧಾತ್ರಿ ದೇವಿಯ ದಿನವನ್ನಾಗಿ ಆಚರಿಸುತ್ತಾರೆ. ಅತ್ಯುನ್ನತ ಆಧ್ಯಾತ್ಮಿಕ ಔನ್ನತ್ಯದ ಈ ರಾತ್ರಿಯಂದು ಸಿದ್ದಿಧಾತ್ರಿಯನ್ನು ಪೂಜಿಸುವ ಮೂಲಕ ಭಕ್ತರು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಸಿದ್ದಿ ಎಂದರೆ ಸಾಧನೆ ಅಥವಾ ಕಾರ್ಯನಿರ್ವಹಣೆ ಎಂದು ಹೇಳಿದರೆ ಧಾತ್ರಿ ಎಂದರೆ ಮನೋಭೀಷ್ಟಗಳನ್ನು ಪೂರೈಸುವವಳು ಎಂದರ್ಥ. ನಮ್ಮಲ್ಲಾ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಪಂಚದ ಮನೋಕಾಮನೆಗಳನ್ನು ದೇವಿಯು ಪೂರೈಸುತ್ತಾಳೆ. ಜೀವನದಲ್ಲಿನ ಎಲ್ಲ ನೋವು,ಸಂಕಟಗಳನ್ನು ದೇವಿಯನ್ನು ಜನರು ಪ್ರಾರ್ಥಿಸುವರು.

ಗಾಡ್ ಅಂಧಕಾರದಿಂದ ಕೂಡಿದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವಿಯು ತ್ರಿಮೂರ್ತಿಗಳನ್ನು ಕೂಡ ಸೃಷ್ಟಿಸಿದಳು. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳನ್ನು ನಿರ್ವಹಿಸಲು ಹೇಳಿದ ದೇವಿಯು ಗಾಢಾಂಧಕಾರದಿಂದ ಕೂಡಿದ ಈ ಸೃಷ್ಟಿಯನ್ನು ತನ್ನ ದಿವ್ಯ ಪ್ರಭೆಯಿಂದ ಕೂಷ್ಮಾಂಡ ದೇವಿಯು ಬೆಳಗಿಸಿದಳು.
ಭಯ ಕರ್ತನಾದ ಶಿವನು ತನ್ನನ್ನು ಪರಿಪೂರ್ಣವಾಗಿ ಸಲು ಕೇಳಿಕೊಂಡಾಗ ಕೂಷ್ಮಾಂಡ ದೇವಿಯು ಆತನಿಗೆ ಒಟ್ಟು 18 ಸಿದ್ಧಿಗಳನ್ನು ದೇವಿಯ ರೂಪದಲ್ಲಿ ಅನುಗ್ರಹಿಸಿದಳು. ಆಕೆಯೇ ಸಿದ್ದಿಧಾತ್ರಿ ದೇವಿ.ಆತನಿಗೆ ಮೊದಲ 8 ಸಿದ್ದಿಗಳಾದ ಅಣಿಮಾ,ಮಹಿಮಾ,ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವಗಳು ಪರಿಪೂರ್ಣತೆಯನ್ನು ನೀಡಿದರೆ ಉಳಿದ ಹತ್ತು ಸಿದ್ದಿಗಳು ಸಂಪೂರ್ಣ ಪರಿಪೂರ್ಣನನ್ನಾಗಿಸಿದವು.

ಸೃಷ್ಟಿಕರ್ತ ಬ್ರಹ್ಮನು ಬ್ರಹ್ಮಾಂಡದಲ್ಲಿ ಸೃಷ್ಟಿ ಕಾರ್ಯವನ್ನು ನಡೆಸಲು ಸಿದ್ದಿರಾತ್ರಿಯ ಸಹಾಯವನ್ನು ಯಾಚಿಸಲು ಆಕೆ ಪರಶಿವನ ಅರ್ಧ ಶರೀರವನ್ನು ಸ್ತ್ರೀ ರೂಪಕ್ಕೆ ಬದಲಾಯಿಸಿದಳು. ಆದ್ದರಿಂದ ಶಿವನನ್ನು 'ಅರ್ಧ ನಾರೀಶ್ವರ' ಎಂದು ಕರೆಯುತ್ತಾರೆ.

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಹಿ
ಮಹಾ ಗೌರಿ ಶುಭಂ ದಧ್ಯಾನ್ಮಹಾದೇವ ಪ್ರಮೋದನಾ

ಸಿಂಹ ವಾಹಿನಿಯಾಗಿರುವ ಸಿದ್ದಿಧಾತ್ರಿಯು ಕಮಲ ಪುಷ್ಪದ ಮೇಲೆ ಕುಳಿತಿದ್ದು ನಾಲ್ಕು ಕೈಗಳನ್ನು ಹೊಂದಿದ್ದು ಶಂಖ, ಚಕ್ರ,ಹರಿಗೆಗಳನ್ನು ಹೊಂದಿದ್ದು ಶ್ವೇತ ವಸ್ತ್ರಧಾರಿಣಿಯಾಗಿರುವ ಮಹಾಶಿವನಿಗೆ ಆನಂದವನ್ನು ತರುವ, ಪರಿಪೂರ್ಣತೆಯನ್ನು ನೀಡುವ ಸಿದ್ದಿ ಧಾತ್ರಿ ದೇವಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.

" ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತ, ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ"

ಎಂದು ದೇವಿಯ ಮಂತ್ರವನ್ನು ಪಠಿಸಬೇಕು.

ಓ ಐ0 ಹ್ರೀ0 ಶ್ರೀಮ್ ಸಿದ್ಧಿ ಧಾತ್ರೈ ನಮಃ

ಎಂಬ ಪ್ರಣವ ಮಂತ್ರವನ್ನು ಪಠಿಸಿ ಆಕೆಯ ಕೃಪೆಗೆ ಪಾತ್ರರಾಗಬೇಕು.

ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು



ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ