Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಹುವಿಧ ದಾಸೋಹದ ಜಾತ್ರೆ

ಕೈಬೀಸಿ ನಮ್ಮೆಲ್ಲರನು ಕರೆಯುತಲಿಹುದು
ನಮ್ಮೂರಿನ ಅದ್ದೂರಿಯ ಜಾತ್ರೆಯು/ಪ/
ಗದಗ ಮಠದ ಜಾತ್ರೆಯ ಸೊಬಗಿನ ಸಿರಿಯನು
ನೋಡಿ ಆನಂದಿಸಿರಿ ನಾಡಿನ ಸೊಗಡನು
ಸಂಭ್ರಮಿಸಲು ಮರೆಯದೆ ಬನ್ನಿ
ಕಣ್ತುಂಬಿ ಅನುಭವಿಸಲು ಬನ್ನಿ/೧/
ರಕ್ತದಾನ ಅತ್ಯುತ್ತಮ ಮಹಾದಾನ
ಸ್ರೃಷ್ಟಿಕರ್ತನಂತೆ ಜೀವದಾನಕೆ ಪ್ರೇರಕವು
ಆರೋಗ್ಯ ಸಂರಕ್ಷಣೆ ತಪಾಸಣೆಯು
ಆರೋಗ್ಯವರ್ಧನೆಯ ಪ್ರತೀಕವು/೨/
ವ್ಯಸನ ಮುಕ್ತ ಪೂಜ್ಯರ ಪಾದಯಾತ್ರೆಯು
ರೋಗಮುಕ್ತ ಪರಿಸರಕೆ ಸ್ಪೂರ್ತಿಸೆಲೆಯು
ಯೋಗಧ್ಯಾನ ಪ್ರಾಣಾಯಮ ಶಿಬಿರವು
ದೀರ್ಘಾಯುಷಿ ಸೌಂದರ್ಯವರ್ಧಕವು/೩/
ದೇಶಿತಳಿ ಜಾನುವಾರು ಪ್ರದರ್ಶನವು
ಕ್ರೃಷಿಮೇಳ ವಿಚಾರ ಸಂಕಿರಣವು
ಸಾವಯವ ನಮ್ಮ ಕೃಷಿ ಪದ್ಧತಿಯು
ಸಮತೋಲನ ಆಹಾರಕೆ ರಹದಾರಿಯು/೪/
ಎಳ್ಹಚ್ಚಿದ ರೊಟ್ಟಿ ತರತರಹದಪಲ್ಯೆ ಚಟ್ನಿಯು
ನಾರಿಯರ ಬಸವಬುತ್ತಿ ಸವಿರುಚಿಯು
ಕರ್ಚಿಕಾಯಿ ಕರಿಹಿಂಡಿ ಮೊಸರನ್ನವು
ಸರ್ವರ ಬಾಯಲಿ ನೀರೂರಿಸುವವು/೫/
ತಜ್ಞರ ವೈಚಾರಿಕ ಚಿಂತನ ಮಂಥನವು
ಜಾಗೃತಿಯ ಹುರಿದುಂಬಿಸುತಲಿಹುದು
ದಿಗ್ಗಜ ಸಾಧಕರ ಕಲಾವಿದರ ಸನ್ಮಾನವು
ಪುಸ್ತಕಬಿಡುಗಡೆ ಜ್ಞಾನತ್ರೃಷೆಯ ರೂವಾರಿಯು/೬/
ಬಹುವಿಧದ ವಿಶೇಷ ದಾಸೋಹವು
ಜಾತ್ರಾ ಮಹೋತ್ಸವದ ವೈಭವವು
ಸಡಗರದ ಅದ್ದೂರಿಯ ವಿಜ್ರಂಭಣೆಯು
ಆಯಸ್ಕಾಂತದಂತೆ ಸರ್ವಾಕರ್ಷಣೆಯು/೭/


ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.ಗದಗ.
೯೯೮೦೭೧೧೪೩೫.
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು