Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ

ಚಳ್ಳೆಹಣ್ಣು ಎಂಬ ನುಡಿಗಟ್ಟನ್ನು ಬಳಸಿರುತ್ತೇವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಚಳ್ಳೆಹಣ್ಣು ಎಂದರೆ ಯಾವುದು, ರೀತಿ ಒಂದು ಹಣ್ಣು ಇದೆ ಎಂಬುದೇ ತಿಳಿದಿಲ್ಲವೆನ್ನಬಹುದು.
ಚಳ್ಳೆ ಹಣ್ಣು ( ಕಾರ್ಡಿಯಾ ಮೈಕ್ಸಾ) ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಿಂದೆ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮರ. ಆದರೆ ಇತ್ತೀಚೆಗೆ ಇದರ ವ್ಯಾಪನೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎನ್ನಬಹುದು. ಆಡುಭಾಷೆಯಲ್ಲಿ ಗೊಣ್ಣೆಹಣ್ಣು, ಸುಂಬಳ ಹಣ್ಣು ಎಂದು ಕರೆಯಲ್ಪಡುವ ಹಣ್ಣು, ಪದಕ್ಕೆ ಅನ್ವರ್ಥದಂತಿದೆ. ಮೇಲಿನ ಸಿಪ್ಪೆ ತೆಗೆದರೆ ಅಂಟು ಅಂಟಾಗಿ, ಜಿಗುಟಾದ ಲೋಳೆಯಂತಹ ಜಾರುವ ಗುಣವನ್ನು ಹೊಂದಿರುವ ಹಣ್ಣಿನ ತಿರುಳು ಚಳ್ಳೆಹಣ್ಣು ಎಂಬ ನುಡಿಗಟ್ಟಿಗೆ ಸರಿಯಾಗಿ ಹೊಂದುವ ಹೋಲಿಕೆ.
ಕೋತಿ, ಅಳಿಲಿನಂತಹ ಮರವಾಸಿ ಪ್ರಾಣಿಗಳು ಹಾಗೂ ಹಲವು ಹತ್ತು ಪಕ್ಷಿಗಳಿಗೆ ಭೂರಿಭೋಜನ ಒದಗಿಸುವ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ. ಆದರೆ ಬದಲಾದ ಕೃಷಿ ಮಾದರಿಯಲ್ಲಿ, ಗೋಮಾಳ, ಕೆರೆಮಾಳ, ರಾಜಕಾಲುವೆ, ಕರಾಬು ಜಮೀನು ಸೇರಿ ಚೂರು ಜಾಗವನ್ನು ಬಿಡದೆ ಕೃಷಿ ಅಥವಾ ಇತರ ಉಪಯೋಗಕ್ಕೆ ಬಳಸುತ್ತಿರುವ ನಾವುಗಳು ಮರಗಳನ್ನು ಅಪರೂಪವಾಗಿಸಿದ್ದೇವೆ. ಮರಗಳ ವಿಶೇಷವೆಂದರೆ ಇವು ಹಳ್ಳದ ಮಗ್ಗಲು, ಇರುವಲ್ಲಿಯೇ ಹೆಚ್ಚಾಗಿ ಬೆಳೆಯುವುದು.
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು