Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

" ವಿಸ್ಕಿ ಲೈಬ್ರರಿ ".

ನನ್ನಜ್ಜಿ ನಡೆದಂತೆ ವಾಹನದ ಓಟವಿತ್ತು
ಹಿಂದಿನ ಆಸನ ಎಡಗಡೆ ಕಿಟಕಿ ನನ್ನದಾಗಿತ್ತು
ವಾಹನದ ಶರವೇಗಕ್ಕೆ ನನ್ನ ಬೈಗುಳವು ಇತ್ತು
ಅನಿವಾರ್ಯ ಅದೊಂದೇ ಗತಿ
ಒಪ್ಪಿದರು ಒಪ್ಪದಿದ್ದರೂ ಅನಿವಾರ್ಯ ಅಸ್ತ್ರ
ಕೆಲವೊಮ್ಮೆ ಹಾಗೆ ಬೇಡದ್ದು ಮೈಗಂಟುವುದು
ಜೋತು ಬಿದ್ದ ಬೇತಾಳದಂತೆ ನನ್ನ ಗತಿ

ಇರಲಿ ವಿಷಯ ಅದಲ್ಲ
ಸುಮ್ಮನಿರದ ಕಣ್ಣುಗಳು ಅಲ್ಲಲ್ಲಿ ಇಣುಕಿತು
ಕಂಡಿತೊಂದು ನಾಮಫಲಕ ಹುಬ್ಬೆರಿಸುವಂತೆ
ಬಿಳಿಗೋಡೆಗೆ ಜೋತು ಬಿದ್ದು ನೇತಾಡುತಿತ್ತು
ವಿಸ್ಕಿ ಲೈಬ್ರರಿ ಇಲ್ಲು೦ಟು ಎಂದು
ಅಬ್ಬಾ.. ಎಂತಹ ವಿಜ್ಞಾನಿಯಿರಬೇಕು
ಸೋಸಿ ಶೋಧಿಸಿ ನಾಮವಿಟ್ಟವರು
ಬಲು ಚತುರ ಮೋಡಿಗಾರ ಇರಬಹುದು

ಒಮ್ಮೆ ದರ್ಶಿಸುವ ಆತುರ
ಆಗಾಗ್ಗೆ ಅದೇ ಗುಂಗು ಗುಯ್ಯಿಗುಡುತಿತ್ತು
ಕೊನೆಗೂ ಪರಮಾಪ್ತನ ದರ್ಶನ
ಮುಖಗವಸ ತೊಟ್ಟು ಬಲಗಾಲ ಇರಿಸಿದೆ
ಏನೋ ತಳಮಳ ಮೊದಲ ಭೇಟಿ ಭಯ
ಉಸಿರು ನೂರರ ಸರಾಸರಿಯಲ್ಲಿ
ಎದೆಬಡಿತ ದುಪ್ಪಟ್ಟು ಕೈ ಕಾಲಿಗೆ ಹಿಮಪಾತ
ಅಲ್ಲಲ್ಲಿ ಗಾಜಿನ ಕಪಾಟು ಬಳುಕುವ ಸೀಸೆಗಳು
ಎಲ್ಲವು ಭಿನ್ನ ವಿಭಿನ್ನ

ತರವೇರಿ ಬಣ್ಣಗಳು ಪುಸ್ತಕದ ಮುಖದಂತೆ
ಅಂದ ಚಂದದ ಬಟ್ಟೆ ತೊಟ್ಟ ಬಾಟಲಿಗಳು
ಆಕರ್ಷಕ ಬರಹಗಳು ರೂಪದರ್ಶಿಯ ಚಿತ್ರಗಳು
ಸಣ್ಣಗೆ ಮಿನುಗುವ ದೀಪ ತಾರೆಗಳು
ಅಲ್ಲಲ್ಲಿ ಸಂಗೀತದ ನಾದ ವಿನೋದ
ಮಾತು ಮಂಥನಕ್ಕೆ ಮೇಜಿನ ತಾಳ
ನೆಕ್ಕಲು ಸೊಂಡಿಗೆ ಉಪ್ಪಿನಕಾಯಿ
ಇಷ್ಟೆ... ವಿಸ್ಕಿ ಲೈಬ್ರರಿ ಗಮತ್ತು...

ಅನಾವರಣಗೊಂಡಿದ್ದು ಮೇಲ್ನೋಟವಷ್ಟೇ
ನಾಲಿಗೆ ಪುಟಗಳು ಕತೆಗಳ ಹೇಳಲಿವೆ
ಕಥೆ ಕವನ ಕಾದಂಬರಿ ಎಲ್ಲವೂ ಲಭ್ಯ
ಗ್ರಂಥದಲ್ಲಿ ಅಲ್ಲ ಬಾಯ್ದೆರೆ ಮಾತ್ರ
ಹಾಸ್ಯದ ಚುಟುಕು ವಿರಹದ ಗೀತೆ
ಬಣ್ಣವಿಲ್ಲದ ನಾಟಕ ಹೃದಯದ ಹಾಡು
ಬಡಿದಬ್ಬಿಸುವ ನೋವಿನ ಕೂಗು
ದಾಸರ ಭಾವ ವಚನಗಳ ಪರಿಷತ್ತು
ದ್ವಿಪದಿ ಚೌಪದಿ ಗಜಲ್ ಟಂಕಗಳ ಮೇಳ
ಕೂಡಿ ಸವಿದು ನಲಿದು ತೇಲಿವೆ

ಬುಡ್ಡಿ ದೀಪದ ಕೆಳಗೆ ರಸಿಕರ ಬಳಗ
ಸಂಗೀತ ಸುಧೆ ಮೇಜು ಕುರ್ಚಿಗಳ ತಾಳ
ಮಿಂಚುವ ಬೆಳಕಲ್ಲಿ ಸ್ವರ್ಗ ಸಗ್ಗದ ಕುಣಿತ
ಹರೆಯದ ಕಥೆಗಳು ಪ್ರೇಮದ ಕವನಗಳು
ಮೆಲ್ಲಗೆ ಹೊರಬಂದ ಕಾವ್ಯದ ಸಾಲುಗಳು
ಸೀಸೆಗಚ್ಚಿದ ಲಾವಣಿ ಬಂಡಾಯ ಬಾವುಟ
ಧೂಳು ಬಿದ್ದ ಮನ ಸಂತೈಸುವ ತಾಣ
ಗೊತ್ತು ಗೊತ್ತಿಲ್ಲದ ಆಸರೆನ್ನುವ ಭ್ರಮೆ
ಅರಿಯೋಣವೇ ಅದಾವುದೆಂದು
ಎದೆಗೆ ಬಿದ್ದು ಮನವ ಗೆದ್ದ ವಿಸ್ಕಿ ಲೈಬ್ರರಿ



ಚೌಡ್ಲಾಪುರ ಸೂರಿ ✍️
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು